
8th June 2025
ಬೆಂಗಳೂರು:ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ನೆಲಮಂಗಲ ಸಮೀಪದ ಗುಬ್ಬಿಗೂಡು ರೆಸರ್ಟ್ನಲ್ಲಿ ಚಿತ್ರ ಸಮೂಹ ಮತ್ತು ಆ್ ರ್ಕಲ್ ಸಂಯುಕ್ತಾಶ್ರಯದಲ್ಲಿ ರ್ಪಡಿಸಿದ್ದ ಕರ್ಯಕ್ರಮದಲ್ಲಿ ಅನಂತ್ ನಾಗ್ ಮತ್ತು ಗಾಯತ್ರಿ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಇದೇ ಸಂರ್ಭದಲ್ಲಿ ಅನಂತ್ನಾಗ್ ಅವರ ಸಿನಿಮಾದ ಹಾಡುಗಳನ್ನು ಹಾಡುವ ಮೂಲಕ ಇಡೀ ಕರ್ಯಕ್ರಮ ರಸಮಯವಾಗುವಂತೆ ಆಯೋಜಿಸಲಾಗಿತ್ತು. ಅವರೊಂದಿಗೆ ನಡೆದ ಸಂವಾದದಲ್ಲಿ ೭೬ ವಸಂತಗಳ ಅನುಭವಗಳನ್ನು ಅವರು ಹಂಚಿಕೊಂಡರು. ಪದ್ಮಭೂಷಣ ಪ್ರಶಸ್ತಿ ಬಂದಿದ್ದು ಕನ್ನಡಿಗರಿಗೆ. ಕನ್ನಡಿಗರು ನನಗೆ ಕೊಟ್ಟಿರುವ ಪ್ರೀತಿಯನ್ನು ಎಂದೂ ಮರೆಯಲಾಗದು ಎಂದು ತಮ್ಮ ಹಲವು ಅನುಭವಗಳನ್ನು ಹೇಳಿಕೊಂಡರು.
ಈ ಸಂರ್ಭದಲ್ಲಿ ಮಾತನಾಡಿದ ರ್ನಾಟಕ ಕರ್ಯ ನಿರತ ಪತ್ರರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು, ಅನಂತ್ ನಾಗ್ ಅವರ ನಟನೆಗೆ ಯಾರೂ ಸಾಟಿ ಇಲ್ಲ. ಅಷ್ಟು ಮನೋಜ್ಞ ಅಭಿನಯ ಅವರದು. ಎಂಬತ್ತರ ಕಾಲಘಟ್ಟದಲ್ಲಿ ಹಿಂದಿ ಮತ್ತು ಇಂಗ್ಲೀಷ್ನಲ್ಲಿ ಮೂಡಿ ಬಂದ ಮಾಲ್ಗುಡಿ ಡೇಸ್ ಧಾರವಾಹಿಯನ್ನು ಮರೆಯಲು ಸಾಧ್ಯವೇ ಇಲ್ಲ. ಚಿತ್ರರಂಗದಲ್ಲಿ ಅನಂತ್ನಾಗ್ ಮತ್ತು ಶಂಕರ್ ನಾಗ್ ಜೋಡಿ ಹೊಸ ಮೋಡಿಯನ್ನು ಮಾಡಿತು. ಆ ಮೂಲಕ ಚಿತ್ರರಂಗಕ್ಕೆ ಹೊಸ ಸಂಚಲನ ತಂದಿತು ಎಂದರು.
ಈ ಸಂರ್ಭದಲ್ಲಿ ಚಿತ್ರ ನಟಿ ಜಯಮಾಲ, ನರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಲಿಂಗದೇವರು, ಶೇಷಾದ್ರಿ, ಕನ್ನಡ ಪ್ರಭ ಸಂಪಾದಕ ರವಿಹೆಗಡೆ, ಸಪ್ತಾಹಿಕ ಸಂಪಾದಕ ಜೋಗಿ, ಗುಬ್ಬಿಗೂಡು ರಮೇಶ್ ಅವರುಗಳು ಅಭಿನಂದಿಸಿ ಮಾತನಾಡಿದರು.
ತುಂಗಭದ್ರಾ ಜಲಾಶಯದ ೧೯ನೇ ಗೇಟ್ ಎಲ್ಲಾ ಗೇಟ್ ಗಳ ಜೊತೆ ಮುಂದಿನ ರ್ಷವೇ ಬದಲಾಯಿಸಿ : ದರೂರು ಪುರುಷೋತ್ತಮ್ ಗೌಡ